ಭಾಗವತರು ನಾಲ್ಕು ಸಂಸ್ಥೆಗಳೊಂದಿಗೆ ನಡೆಸಿದ ಕಾರ್ಯಕ್ರಮ
ರಂಗಭೂಮಿಯ 4 ಜನ ಗೆಳೆಯರು ಮೊದಲ ಬಾರಿಗೆ ಸಿನಿಮಾ ನಿದೇಶನ ಮಾಡಿದ್ದಾರೆ.
ಹಾಡು ಹಕ್ಕಿ ಹಾಡು - ನಾಗೇಂದ್ರ ಷಾಈ ಸಿನಿಮಾಗಳ ಪ್ರದರ್ಶನದ ಜೊತೆಗೆ ಸಿನಿಮಾಗಳ ಬಗ್ಗೆ ಅಭಿಪ್ರಾಯಮಂಡನೆಯನ್ನು ಕ್ರಮವಾಗಿ ಗಿರೀಶ್ ಕಾಸರವಳ್ಳಿ ಡಾ.ಬಿ.ಟಿ.ಲಲಿತಾನಾಯಕ್, ಪಿ.ಶೇಷಾದ್ರಿ, ಬಿ.ಗಣಪತಿ ಇವರುಗಳು ಮಾತನಾಡಿದರು. ಆನಂತರ ನಿರ್ದೇಶಕರುಗಳಿಗೆ ರಂಗಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದ ವಿಶಿಷ್ಟತೆಯಿಂದ ಆಯೋಜನೆಗೊಂಡು ಯಶಸ್ವಿಯಾಗಿ ನಡೆಯಿತು. ಇಂತಹ ಪ್ರಯತ್ನ ಆಗಿರುವುದು ಬಹುಶಃ ಮೊದಲಬಾರಿಗೆ.
ವಾಸ್ತವವಾದಿ ನೆಲೆಗಟ್ಟಿನಲ್ಲಿ ತಮ್ಮ ಸೈದ್ಧಾಂತಿಕ ಚಿಂತನೆಗಳನ್ನು ನಾಡಿನಾದ್ಯಂತ ಬಿತ್ತಿ ಬೆಳೆದವರು ಪ್ರೊ:ಬರಗೂರು ರಾಮಚಂದ್ರಪ್ಪ. ಕ್ರಿಯಾಶೀಲರು;ಸೃಜನಾತ್ಮಕರೂ ಆದ ಬರಗೂರು ನಾಡು ಕಂಡ ಅಪ್ರತಿಮ ಚಿಂತಕ.
ಅವರ ಕುರಿತಾದ ಇಡೀ ಒಂದು ದಿನದ ಕಾರ್ಯಕ್ರಮ “ಸೂರ್ಯ ಸಂಸ್ಕøತಿ” ಸಾಹಿತ್ಯ ವಾಚಿಕೆ ಪುಸ್ತಕ ಬಿಡುಗಡೆ. ಅವರ ಕವಿತೆ ಓದು, ಸಾಕ್ಷ್ಯಚಿತ್ರ ಪ್ರದರ್ಶನ, ಅವರ ಬರವಣಿಗೆ ಕುರಿತಾದ ವಿಚಾರಸಂಕಿರಣ. ಮತ್ತು ಅವರು ಬರೆದಿರುವ ಭಾವಗೀತೆ ಮತ್ತು ಚಲನಚಿತ್ರಗೀತೆಗಳ ಗಾಯನ, ಸಾಂಸ್ಕøತಿಕ ಗೌರವ, ಚಲನಚಿತ್ರ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಅತ್ಯಂತ ಯಶಸ್ವಿಯಾಗಿ ನಡೆದ ಕಾರ್ಯಕ್ರಮದಲ್ಲಿ ನಾಡೋಜ ಪ್ರೊ:ನಿಸಾರ್ಅಹಮದ್, ಹಿ.ಶಿ.ರಾಮಚಂದ್ರೇಗೌಡ, ಡಾ.ಬಂಜಗೆರೆಜಯಪ್ರಕಾಶ್, ಪ್ರೊ;ಹಿ.ಚಿ.ಬೋರಲಿಂಗಯ್ಯ, ಟಿ.ಎನ್.ಸೀತಾರಾಮಯ್ಯ, ಸೇರಿದಂತೆ ನಾಡಿನ ಅನೇಕ ಹಿರಿಯ ಸಾಹಿತಿಗಳು, ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯುವ ಬರಹಗಾರ, ನಾಟಕಕಾರ ಕೆ. ವೈ. ನಾರಾಯಣಸ್ವಾಮಿ ಅವರ, "ಚಕ್ರರತ್ನ", "ಕೈವಾರ ನಾರೇಯಣ", "ಮಲೆ ಮಾಂತ್ರಿಕ", "ಪಂಪ ಭಾರತ" ಹಾಗೂ "ಅನಭಿಜ್ಞ ಶಾಕುಂತಲ" ನಾಟಕಗಳ ಪ್ರದರ್ಶನದ ಜೊತೆಗೆ ಐದೂ ನಾಟಕಗಳ ಕುರಿತ ವಿಚಾರ ಸಂಕಿರಣ, ರಂಗಗೀತೆಗಳು ಹಾಗೂ ಕೆ.ವೈ.ಎನ್ ಅವರಿಗೆ ರಂಗಗೌರವವನ್ನು ನೀಡಲಾಯಿತು.
ಕಳೆದ ಮೂರು-ನಾಲ್ಕು ದಶಕಗಳಲ್ಲಿ ಒಬ್ಬ ನಾಟಕಕಾರನ ಐದು ನಾಟಕಗಳು ಪ್ರದರ್ಶನ ಹಾಗೂ ಆ ಐದು ನಾಟಕಗಳ ಕುರಿತ ವಿಚಾರ ಸಂಕಿರಣ ಒಂದೇ ವೇದಿಕೆಯಲ್ಲಿ ನಡೆದಿರುವುದು ಬಹುಶಃ ಇದೆ ಮೊದಲು. ಯಾವುದೇ ವಿಶೇಷ ಸಂದರ್ಭವಿಲ್ಲದೇ ಕಿಕ್ಕಿರಿದ ಜನಸಂದಣಿಯೊಂದಿಗೆ ಯಶಸ್ವಿಯಾದ ನಾಟಕೋತ್ಸವ.
ಕುವೆಂಪು ಗೀತೆಗಳ ನಮನ – ನುಡಿ ನಮನ ಡಾ|| ದೊಡ್ಡರಂಗೇಗೌಡ, ಡಾ|| ಸುನೀಲ್ ಮಲ್ಲೇಶ, ನಾರಾಯಣಗೌಡ ಅವರು ಭಾಗವಹಿಸಿದ್ದರು. ಗಾಯನದಲ್ಲಿ: ಬಿ.ಕೆ. ಸುಮಿತ್ರಾ, ಕಸ್ತೂರಿ ಶಂಕರ್, ಡಾ|| ವೇಮಗಲ್ ನಾರಾಯಣ ಸ್ವಾಮಿ, ಯಶವಂತ ಹಳಿಬಂಡಿ, ರೋಹಿಣಿಮೋಹನ, ಅಪ್ಸಗೆರೆ ತಿಮ್ಮರಾಜು, ಹೇಮ ಪ್ರಸಾದ್, ವಿಜಯ ಹಾವನೂರು, ಮೃತ್ಯುಂಜಯ ದೊಡ್ಡವಾಡ ಶಮಿತಾ ಮಲ್ನಾಡ್, ಆನಂದ ಮಾದಲಗೆರೆ ಮೊದಲಾದವರು ಗಾಯನದಲ್ಲಿ ಭಾಗವಹಿಸಿದ್ದರು. ಸಹಯೋಗ : ಕುವೆಂಪು ಆದರ್ಶ ಗೆಳೆಯರ ಬಳಗ (ರಿ)
ಖ್ಯಾತ ರಂಗ ಕಲಾವಿದೆ, ರಂಗ ನಿರ್ದೇಶಕರಾದ ಶ್ರೀಮತಿ ಬಿ. ಜಯಶ್ರೀ ಅವರು ಕನ್ನಡ ರಂಗಭೂಮಿಯಿಂದ ಪ್ರಪ್ರಥಮ ಬಾರಿಗೆ ನಾಮಕರಣಗೊಂಡ ಸಂಭ್ರಮವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಸ್ಪಂದನ ನಾಟಕೋತ್ಸವ ನಡೆಯಿತು. ರಂಗ ಗೀತೆಗಳು, ರಂಗಗೌರವದ ಜೊತೆಗೆ ಬಿ. ಜಯಶ್ರೀ ರಂಗಾಸಕ್ತರೊಡನೆ ಮಾತುಕತೆ ನಡೆಸಿದರು. ಸ್ಪಂದನ ತಂಡದ ಬಿ. ಜಯಶ್ರೀ ನಿರ್ದೇಶನದ ಹಾಗೂ ಅಭಿನಯದ ಕರಿಮಾಯಿ ಹಾಗೂ ಸದಾರಮೆ ನಾಟಕಗಳು ಪ್ರಯೋಗಗೋಂಡವು.
ಕನ್ನಡದ ಹಿರಿಯ ಗಾಯಕ, ಸಂಗೀತ ಸಂಯೋಜಕ ಡಾ|| ಸಿ. ಆಶ್ವಥ್ ಮತ್ತು ಹಿರಿಯ ನಟ ಡಾ|| ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿದ ಸಂದರ್ಭದಲ್ಲಿ ಇಂಡಿಯನ್ ಕಲ್ಚರಲ್ ಅಕಾಡೆಮಿಯ ಸಹಯೋಗದೊಂದಿಗೆ ನಕ್ಷತ್ರ ನಮನ ಗಾಯನ ಸಮರ್ಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ|| ದೊಡ್ಡರಂಗೇಗೌಡ, ಡಾ|| ಎಚ್. ಎಸ್. ವೆಂಕಟೇಶಮೂರ್ತಿ, ಶ್ರೀನಿವಾಸ ಜಿ. ಕಪ್ಪಣ್ಣ ಭಾಗವಹಿಸಿದ್ದರು.
ಭಾಗವತರು ಆಯೋಜಿಸಿದ ಹೆಮ್ಮೆಯ ಉತ್ಸವ ‘ರಂಗಸಿರಿ ಉಮಾಶ್ರೀ’ ನಾಟಕೋತ್ಸವ- ವಿಚಾರ ಸಂಕೀರಣ, ಸಂವಾದ, ರಂಗ ಗೌರವಗಳನ್ನೊಳಗೊಂಡಿತ್ತು. ಉಮಾಶ್ರೀ ಅಭಿನಯದ ಹರಕೆಯ ಕುರಿ, ಬಸ್ ಕಂಡಕ್ಟರ್, ಒಡಲಾಳ ನಾಟಕಗಳು ತುಂಬಿದ ಗೃಹಗಳಿಗೆ ಪ್ರದರ್ಶಿತಗೊಂಡವು. ಇದೇ ಸಂದರ್ಭದಲ್ಲಿ ‘ಮಹಿಳೆ ಮತ್ತು ರಂಗಭೂಮಿ’ ವಿಚಾರ ಸಂಕಿಣ ನಡೆಯಿತು. ಉಮಾಶ್ರೀ ಅವರೊಂದಿಗೆ ಸಂವಾದ ಹಾಗೂ ಉಮಾಶ್ರೀ ಅವರಿಗೆ ರಂಗಗೌರವ ಕಾರ್ಯಕ್ರಮ ನಡೆಯಿತು.
ರಂಗಾಯಣದ ಕಲಾವಿದೆ ಬಿ. ಎನ್. ಶಶಿಕಲಾ ಅವರು ಎಸ್. ರಾಮನಾಥ್ ಅವರ ನಾಟಕ ‘ಕಸ್ತೂರ ಬಾ’ ಅನ್ನು ಏಕವ್ಯಕ್ತಿ ಪ್ರಯೋಗವಾಗಿ ಶಶಿಧರ ಭಾರಿಘಾಟ್ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು.
ಶ್ರೀಮತಿ ವಿದ್ಯಾಕೊಳ್ಯೂರ್ ಅವರ ಪ್ರದಾನ ಪಾತ್ರದಲ್ಲಿ ನವದೆಹಲಿಯ ಯಕ್ಷ ಮಂಜೂಷ ತಂಡ ಈ ಕಾರ್ಯಕ್ರಮ ಸಾದರಪಡಿಸಿತು.
ರಂಗಭೂಮಿ ಸಂಬಂಧಿ ಜಟುವಟಿಕೆಗಳ ಜೊತೆಜೊತೆಗೆ ಭಾಗವತರು ಸಂಗೀತ ಕಾರ್ಯಕ್ರಮವನ್ನೂ ನಡೆಸುತ್ತಾ ಬಂದಿರುವುದು ಸಂಸ್ಥೆಯ ವಿವಿಧ ಅಭಿರುಚಿಯನ್ನು ತೋರುತ್ತದೆ. ಯುವ ಗಾಯಕರಾದ ವಿಜಯಹಾವನೂರು, ವಿದುಷಿ ಸ್ನೇಹ ಹಂಪಿಹೊಳಿ, ನಾಗಚಂದ್ರಿಕಾ ಭಟ್, ಆನಂದ್ ಮಾದಲಗೆರೆ ಇವರು ಪ್ರಸ್ತುತ ಪಡಿಸಿದರು.